ಶುಕ್ರವಾರ ಮಧ್ಯರಾತ್ರಿ ದಾಬಸ್ ಪೇಟೆ- ಹೊಸೂರು ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಚಿಕ್ಕತಿರುಪತಿ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯು ಬೋಧನಹೊಸಹಳ್ಳಿಯ ರಸ್ತೆ ತಿರುವಿನಲ್ಲಿರುವ ಹಾಲಿನ ಕೇಂದ್ರದ ಗೋಡೆಗೆ ಡಿಕ್ಕಿ ಹೊಡೆದು, ಪಕ್ಕದ ಮನೆಯ ಒಳಗೆ ನುಗ್ಗಿದೆ. ನಿದ್ರಿಸುತಿದ್ದವರ ಮೇಲೆ ಅದು ಹರಿದಿದೆ. ಪರಿಣಾಮ ಮನೆಯಲ್ಲಿ ಮಲಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.