35ರಿಂದ 40ಕುಟುಂಬಗಳು ವಾಸ ಇರುವ ಬಡಾವಣೆಯಲ್ಲಿ ಸಮರ್ಪಕ ಬೀದಿ ದೀಪಗಳಿಲ್ಲ. ಖಾಸಗಿಯಾಗಿ ನೀರು ಖರೀದಿ ಮಾಡುವ ಸ್ಥಿತಿ ಇದೆ. ಬೈಚಾಪುರ ರಸ್ತೆಯಿಂದ ಆಕಾಶ್ ವೈದ್ಯಕೀಯ ಕಾಲೇಜು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮೂಲಕ ರೋಗಿಗಳು ನಡೆದು ಹೋಗಬೇಕಾಗಿದೆ. ಬೂದಿಗೆರೆ, ಬೆಟ್ಟಕೋಟೆ, ಅಣ್ಣೇಶ್ವರ ಮಾರ್ಗದಲ್ಲಿ ಆಕಸ್ಮಿಕವಾಗಿ ಸಂಭವಿಸುವ ಅಪಘಾತದ ಗಾಯಾಳುಗಳನ್ನು ಇದೇ ಮಾರ್ಗದಲ್ಲಿ ಸಾಗಿಸಬೇಕಾಗಿದೆ. ಮೂಲ ಸೌಲಭ್ಯಕ್ಕೆ ಒತ್ತು ನೀಡದಿದ್ದರೆ ಹೇಗೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.