ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಗದ ಚಾಲಾಕಿ ಕರಡಿ

Last Updated 1 ಏಪ್ರಿಲ್ 2021, 7:20 IST
ಅಕ್ಷರ ಗಾತ್ರ

ಆನೇಕಲ್: ಬನ್ನೇರುಘಟ್ಟದಿಂದ ತಪ್ಪಿಸಿಕೊಂಡು ಬಂದಿದ್ದ ಕರಡಿ ಮಂಗಳವಾರ ತಾಲ್ಲುಕಿನ ಶೆಟ್ಟಿಹಳ್ಳಿ, ತಟ್ನಹಳ್ಳಿಗಳಲ್ಲಿ ಜನರ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿಗಾಗಿ ಬುಧವಾರ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಕರಡಿಯ ಕುರುಹುಗಳನ್ನು ಹೊರತುಪಡಿಸಿ ಕರಡಿಯ ಸುಳಿವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ತಾಲ್ಲೂಕಿನ ಆವಡದೇನಹಳ್ಳಿ ಕೆರೆಯ ಬಳಿ ಕರಡಿ ಓಡಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದವು. ರೈತರೊಬ್ಬರು ಬಾಳೆ ತೋಟದಲ್ಲಿ ಕರಡಿಯನ್ನು ಕಂಡಿದ್ದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆವಡದೇನಹಳ್ಳಿ, ಮರಸೂರು ಕೆರೆ, ದೊಡ್ಡಹಾಗಡೆ, ಬ್ಯಾಗಡದೇನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆದರೆ ಸಂಜೆಯವರೆಗೂ ಕರಡಿಯ ಪತ್ತೆಯಾಗಿಲ್ಲ. ಮಂಗಳವಾರದ ದಾಳಿಯಿಂದ ಜನರು ಗಾಬರಿಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT