ಬೆಳಿಗ್ಗೆ ತಾಲ್ಲೂಕಿನ ಆವಡದೇನಹಳ್ಳಿ ಕೆರೆಯ ಬಳಿ ಕರಡಿ ಓಡಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದವು. ರೈತರೊಬ್ಬರು ಬಾಳೆ ತೋಟದಲ್ಲಿ ಕರಡಿಯನ್ನು ಕಂಡಿದ್ದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆವಡದೇನಹಳ್ಳಿ, ಮರಸೂರು ಕೆರೆ, ದೊಡ್ಡಹಾಗಡೆ, ಬ್ಯಾಗಡದೇನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆದರೆ ಸಂಜೆಯವರೆಗೂ ಕರಡಿಯ ಪತ್ತೆಯಾಗಿಲ್ಲ. ಮಂಗಳವಾರದ ದಾಳಿಯಿಂದ ಜನರು ಗಾಬರಿಗೊಂಡಿದ್ದರು.