ಸಮೀಪದ ಮಾದೇಗೌಡರ ನಾಲ್ಕು ಎಕರೆ ಪ್ರದೇಶದಲ್ಲಿನ ಮಾವಿನ ತೋಟದಲ್ಲಿ ಬಿದ್ದು ಹಾಗೂ ಗಾಳಿಯಿಂದಾಗಿ ಮಾವಿನ ಫಸಲು ನೆಲಕಚ್ಚಿದೆ. ಕುರುಬರಹಳ್ಳಿಯಲ್ಲಿ ತಿಪ್ಪಣ್ಣ ಎಂಬುವವರಿಗೆ ಸೇರಿದ್ದ ಫಸಲಿಗೆ ಬಂದಿದ್ದ ಬಾಳೆ ಗಿಡಗಳು ಮುರಿದು ಹೋಗಿವೆ. ಇದಲ್ಲದೆ ಸಾಸಲು ಹೋಬಳಿಯಲ್ಲೂ ಗಾಳಿ, ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಸಾಸಲು ಹೋಬಳಿಯ ಗ್ರಾಮಗಳು ಇಡೀ ರಾತ್ರಿ ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ಜನ ಕಾಲ ಕಳೆಯುವಂತಾಗಿತ್ತು.