<p><strong>ವಿಜಯಪುರ (ದೇವನಹಳ್ಳಿ):</strong> ಇಲ್ಲಿನ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ವೀರಭದ್ರಸ್ವಾಮಿ ಗೋಷ್ಠಿ, ಅಕ್ಕನ ಬಳಗದ ವತಿಯಿಂದ 130ನೇ `ತಿಂಗಳ ಬೆಳಕು' ಕಾರ್ಯಕ್ರಮ ನಡೆಯಿತು.</p>.<p>ಶಿವ ಪರಮಾತ್ಮನು ನಿರಾಕಾರ ಸ್ವರೂಪಿಯಾಗಿದ್ದು, ಆತನನ್ನು ನಿಶ್ಚಲ ಮನಸ್ಸಿನಿಂದ ನೆನೆದರೆ ಜೀವನದಲ್ಲಿ ಭಯವಿರುವುದಿಲ್ಲ. ಶಿವನು ಭಕ್ತರ ಸದಾಶಯಗಳನ್ನು ಈಡೇರಿಸುವ ಕರುಣಾಮಯಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಚಾರಕಿ ಶಿವಮಣಿ ಅಕ್ಕ ತಿಳಿಸಿದರು.</p>.<p>12ನೇ ಶತಮಾನದ ಶಿವಶರಣರು ಆತ್ಮ ಮತ್ತು ಪರಮಾತ್ಮನ ಅವಿನಾಭಾವ ಸಂಬಂಧವನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದ್ದಾರೆ. ವಿಜಯಪುರದ ಜನತೆ ಶಿವಶರಣರ ಭಕ್ತಿ ಮಾರ್ಗವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಪ್ರಜಾಪಿತ ಬ್ರಹ್ಮಕುಮಾರಿಯ ಸಂಚಾಲಕಿ ರೂಪಕ್ಕ ತಿಳಿಸಿದರು.</p>.<p>ಈವರೆಗೂ 371 ಶಿವಾನುಭವ ಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಅರಿವಿನ ಮನೆಯು ಶರಣರ ಕಾಲದ ಅನುಭವ ಮಂಟಪದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶರಣೆ ಅಂಬಾ ಭವಾನಿ ಹೇಳಿದರು. ಅಕ್ಕನ ಬಳಗದ ಸದಸ್ಯರಾದ ವಿಮಲಾಂಬ, ಭಾರತಿ, ರಾಧಾ, ಮೀನಾಕುಮಾರಿ, ನಿರ್ಮಲ, ಚಂದ್ರಕಲಾ, ಭಕ್ತಾಧಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ (ದೇವನಹಳ್ಳಿ):</strong> ಇಲ್ಲಿನ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ವೀರಭದ್ರಸ್ವಾಮಿ ಗೋಷ್ಠಿ, ಅಕ್ಕನ ಬಳಗದ ವತಿಯಿಂದ 130ನೇ `ತಿಂಗಳ ಬೆಳಕು' ಕಾರ್ಯಕ್ರಮ ನಡೆಯಿತು.</p>.<p>ಶಿವ ಪರಮಾತ್ಮನು ನಿರಾಕಾರ ಸ್ವರೂಪಿಯಾಗಿದ್ದು, ಆತನನ್ನು ನಿಶ್ಚಲ ಮನಸ್ಸಿನಿಂದ ನೆನೆದರೆ ಜೀವನದಲ್ಲಿ ಭಯವಿರುವುದಿಲ್ಲ. ಶಿವನು ಭಕ್ತರ ಸದಾಶಯಗಳನ್ನು ಈಡೇರಿಸುವ ಕರುಣಾಮಯಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಚಾರಕಿ ಶಿವಮಣಿ ಅಕ್ಕ ತಿಳಿಸಿದರು.</p>.<p>12ನೇ ಶತಮಾನದ ಶಿವಶರಣರು ಆತ್ಮ ಮತ್ತು ಪರಮಾತ್ಮನ ಅವಿನಾಭಾವ ಸಂಬಂಧವನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದ್ದಾರೆ. ವಿಜಯಪುರದ ಜನತೆ ಶಿವಶರಣರ ಭಕ್ತಿ ಮಾರ್ಗವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಪ್ರಜಾಪಿತ ಬ್ರಹ್ಮಕುಮಾರಿಯ ಸಂಚಾಲಕಿ ರೂಪಕ್ಕ ತಿಳಿಸಿದರು.</p>.<p>ಈವರೆಗೂ 371 ಶಿವಾನುಭವ ಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಅರಿವಿನ ಮನೆಯು ಶರಣರ ಕಾಲದ ಅನುಭವ ಮಂಟಪದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶರಣೆ ಅಂಬಾ ಭವಾನಿ ಹೇಳಿದರು. ಅಕ್ಕನ ಬಳಗದ ಸದಸ್ಯರಾದ ವಿಮಲಾಂಬ, ಭಾರತಿ, ರಾಧಾ, ಮೀನಾಕುಮಾರಿ, ನಿರ್ಮಲ, ಚಂದ್ರಕಲಾ, ಭಕ್ತಾಧಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>