<p>ವಿಜಯಪುರ (ದೇವನಹಳ್ಳಿ): ಇಲ್ಲಿನ ಬಿಜ್ಜವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವನಮಹೋತ್ಸವದಲ್ಲಿ ಹೊಂಗೆ, ನೇರಳೆ, ಹಲಸು, ಮಾವು, ಬೇವು ಸೇರಿ ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು.</p>.<p>ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಘಟಕದ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎನ್. ಮಧುಸೂದನ್ ಮಾತನಾಡಿ, ‘ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದ್ದು, ಮರಗಳು ನಮಗೆ ಶುಭ್ರ ಆಮ್ಲಜನಕ ನೀಡುವುದಲ್ಲದೆ, ಮಣ್ಣಿನ ಸವಕಳಿ ತಡೆದು ಕಾಲಕಾಲಕ್ಕೆ ಸರಿಯಾಗಿ ಮಳೆಯಾಗಲು ನೆರವಾಗುತ್ತವೆ’ ಎಂದು ಹೇಳಿದರು.</p>.<p>ಪ್ರತಿಯೊಬ್ಬರೂ ಒಂದು ಗಿಡವನ್ನಾದರೂ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು. ವನಮಹೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳ್ಳದೆ ಮುಂದಿನ ನಮ್ಮ ಯುವ ಪೀಳಿಗೆಗೆ ಶುದ್ಧ ಹಸಿರು ಭೂಮಿಯನ್ನು ಉಳಿಸುವ ಕಾಯಕವಾಗಬೇಕಿದೆ ಎಂದು ಕೆ.ಕೆ. ಶಶಿವರ್ಧನ್ ಹೇಳಿದರು.</p>.<p>ಎಸ್ಬಿಐ ಆಡಳಿತ ವರ್ಗದ ಅನಿತಾ ನಾಯರ್, ಮಹೇಶ್ ಕುಮಾರ್, ಮಾಧವಿ, ಸತೀಶ್, ಎಸ್.ಸಿ.ಐ ನವ ದೆಹಲಿಯ ಖಜಾಂಚಿ ಕೆ.ಆರ್.ಲವರಾಜು, ಕರ್ನಾಟಕ ಗ್ರೂಪ್ ನ ಕಾರ್ಯದರ್ಶಿ ವಿ. ಪ್ರಶಾಂತ, ಪ್ರಗತಿಪರ ರೈತ ಬಿಜ್ಜವಾರ ಗ್ರಾಮದ ಮದೀಶ್, ವಿದ್ಯಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-15-1407883313</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ (ದೇವನಹಳ್ಳಿ): ಇಲ್ಲಿನ ಬಿಜ್ಜವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವನಮಹೋತ್ಸವದಲ್ಲಿ ಹೊಂಗೆ, ನೇರಳೆ, ಹಲಸು, ಮಾವು, ಬೇವು ಸೇರಿ ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು.</p>.<p>ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಘಟಕದ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎನ್. ಮಧುಸೂದನ್ ಮಾತನಾಡಿ, ‘ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದ್ದು, ಮರಗಳು ನಮಗೆ ಶುಭ್ರ ಆಮ್ಲಜನಕ ನೀಡುವುದಲ್ಲದೆ, ಮಣ್ಣಿನ ಸವಕಳಿ ತಡೆದು ಕಾಲಕಾಲಕ್ಕೆ ಸರಿಯಾಗಿ ಮಳೆಯಾಗಲು ನೆರವಾಗುತ್ತವೆ’ ಎಂದು ಹೇಳಿದರು.</p>.<p>ಪ್ರತಿಯೊಬ್ಬರೂ ಒಂದು ಗಿಡವನ್ನಾದರೂ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು. ವನಮಹೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳ್ಳದೆ ಮುಂದಿನ ನಮ್ಮ ಯುವ ಪೀಳಿಗೆಗೆ ಶುದ್ಧ ಹಸಿರು ಭೂಮಿಯನ್ನು ಉಳಿಸುವ ಕಾಯಕವಾಗಬೇಕಿದೆ ಎಂದು ಕೆ.ಕೆ. ಶಶಿವರ್ಧನ್ ಹೇಳಿದರು.</p>.<p>ಎಸ್ಬಿಐ ಆಡಳಿತ ವರ್ಗದ ಅನಿತಾ ನಾಯರ್, ಮಹೇಶ್ ಕುಮಾರ್, ಮಾಧವಿ, ಸತೀಶ್, ಎಸ್.ಸಿ.ಐ ನವ ದೆಹಲಿಯ ಖಜಾಂಚಿ ಕೆ.ಆರ್.ಲವರಾಜು, ಕರ್ನಾಟಕ ಗ್ರೂಪ್ ನ ಕಾರ್ಯದರ್ಶಿ ವಿ. ಪ್ರಶಾಂತ, ಪ್ರಗತಿಪರ ರೈತ ಬಿಜ್ಜವಾರ ಗ್ರಾಮದ ಮದೀಶ್, ವಿದ್ಯಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-15-1407883313</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>