ಸೇತುವೆ ಮೇಲೆ ಗುಂಡಿಗಳು ಕಾಣಿಸಿಕೊಂಡಿರುವುದರಿಂದ ಸಂಚಾರಕ್ಕೆ ಆತಂಕ ಎದುರಾಗಿದೆ. ಮೇಲ್ಸುತುವೆಯನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಬೇಕು.
ಎಂ.ಕೇಶವಪ್ಪ, ಪುರಸಭೆ ಸದಸ್ಯ
ನೂರಾರು ವಾಹನಗಳು ಮೇಲ್ಸೇತುವೆ ಮೇಲೆ ಸಂಚರಿಸುತ್ತವೆ. ಭಾರಿ ಗಾತ್ರದ ಸರಕು ವಾಹನ ಸಂಚಾರದಿಂದ ಅಪಾಯ ಎದುರಾಗಿದೆ. ದುರಸ್ತಿಗೊಳಿಸಿ ಸುಗಮ ಸಂಚಾರ ಕಲ್ಪಿಸಬೇಕು.
ಕಿರಣ್, ಯುವ ಮುಖಂಡ
ಮೇಲ್ಸೇತುವೆ ಶಿಥಲಾವಸ್ಥೆ ತಲುಪಿದ್ದು, ಭಾರಿ ಗಾತ್ರದ ವಾಹನಗಳ ಸಂಚಾರ ನಿರ್ಬಂಧಿಸಬೇಕು. ತುರ್ತಾಗಿ ಗುಂಡಿಗಳನ್ನು ಮುಚ್ಚಬೇಕು. ರಾಜಕಾಲುವೆ ಸ್ವಚ್ಛತೆ ಕೈಗೊಳ್ಳಬೇಕು.
ಜಯರಾಮ್, ಸ್ಥಳೀಯ ನಿವಾಸಿ
ಮೇಲ್ಸೇತುವೆ ಸುತ್ತಲೂ ಕಸ ಸುರಿಯುತ್ತಿರುವುದರಿಂದ ಪರಿಸರ ಮಾಲಿನ್ಯಗೊಂಡಿದೆ. ರಾಜಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯುತ್ತಿಲ್ಲ. ಸೊಳ್ಳೆ, ಹಾವು, ಹೆಗ್ಗಣ ಕಾಟ ಹೆಚ್ಚಾಗಿದೆ