<p><strong>ವಿಜಯಪುರ (ದೇವನಹಳ್ಳಿ):</strong> ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಆಂಧ್ರ ಪ್ರದೇಶ ಮೂವರಿಂದ ವಿಜಯಪುರ ಬಳಿ ₹15 ಲಕ್ಷ ದೋಚಿ ಪರಾರಿಯಾಗಿದ್ದ ಏಳು ದರೋಡೆಕೋರರಲ್ಲಿ ಐವರನ್ನು ವಿಜಯಪುರ ಟೌನ್ ಪೊಲೀಸರು ವಿಜಯನಗರ ಜಿಲ್ಲೆಯಲ್ಲಿಯ ಹರಪನಹಳ್ಳಿಯಲ್ಲಿ ಬಂಧಿಸಿದ್ದಾರೆ.</p><p>ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಹೋಬಳಿ ಯಲ್ಲಾಪುರ ಗ್ರಾಮದ ಕಾವಾಡಿ ಷಣ್ಮಖ (24), ಷಣ್ಮುಖ (32), ಕಾವಾಡಿ ಗಣೇಶ್ (23), ದ್ಯಾಪನಹಳ್ಳಿಯ ಸಣ್ಣಜ್ಜನವರ್ ಸಾಗರ್ (28), ಹಾರಕ್ಕನಹಳ್ಳಿ ಗ್ರಾಮದ ಪೂಜಾರಿ ಮಂಜಪ್ಪ (40) ಅವರನ್ನು ವಿಜಯಪುರ ಪೊಲೀಸರು ಈಚೆಗೆ ಹರಪನಹಳ್ಳಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.</p><p>ರಮೇಶ್ ಕುಮಾರ್ ಮತ್ತು ಸುನೀಲ್ ಎಂಬುವರು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ನಕಲಿ ಚಿನ್ನ ಮತ್ತು ದರೋಡೆ ಮಾಡಿದ್ದ ₹15 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p><p>ಆಂಧ್ರಪ್ರದೇಶದ ವಿಶ್ವಪ್ರಸಾದ ರೆಡ್ಡಿ ಎಂಬುವರಿಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ, ವಿಜಯಪುರ ಹೋಬಳಿಯ ರಾಷ್ಟ್ರೀಯ ಹೆದ್ದಾರಿ 7ರ ವೆಂಕಟಗಿರಿಕೋಟೆ ಬಡಾವಣೆಗೆ ಬುಧವಾರ ಕರೆಸಿಕೊಂಡಿದ್ದರು. ₹15 ಲಕ್ಷದೊಂದಿಗೆ ಬಂದ ವಿಶ್ವಪ್ರಸಾದ ಹಾಗೂ ಇಬ್ಬರು ಸ್ನೇಹಿತರ ಮೇಲೆ ಆರು ದರೋಡೆಕೋರರು ಹಲ್ಲೆ ಮಾಡಿ ₹15 ಲಕ್ಷ ಹಣ ದೋಚಿ ಪರಾರಿಯಾಗಿದ್ದರು. ವಿಜಯಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ (ದೇವನಹಳ್ಳಿ):</strong> ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಆಂಧ್ರ ಪ್ರದೇಶ ಮೂವರಿಂದ ವಿಜಯಪುರ ಬಳಿ ₹15 ಲಕ್ಷ ದೋಚಿ ಪರಾರಿಯಾಗಿದ್ದ ಏಳು ದರೋಡೆಕೋರರಲ್ಲಿ ಐವರನ್ನು ವಿಜಯಪುರ ಟೌನ್ ಪೊಲೀಸರು ವಿಜಯನಗರ ಜಿಲ್ಲೆಯಲ್ಲಿಯ ಹರಪನಹಳ್ಳಿಯಲ್ಲಿ ಬಂಧಿಸಿದ್ದಾರೆ.</p><p>ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಹೋಬಳಿ ಯಲ್ಲಾಪುರ ಗ್ರಾಮದ ಕಾವಾಡಿ ಷಣ್ಮಖ (24), ಷಣ್ಮುಖ (32), ಕಾವಾಡಿ ಗಣೇಶ್ (23), ದ್ಯಾಪನಹಳ್ಳಿಯ ಸಣ್ಣಜ್ಜನವರ್ ಸಾಗರ್ (28), ಹಾರಕ್ಕನಹಳ್ಳಿ ಗ್ರಾಮದ ಪೂಜಾರಿ ಮಂಜಪ್ಪ (40) ಅವರನ್ನು ವಿಜಯಪುರ ಪೊಲೀಸರು ಈಚೆಗೆ ಹರಪನಹಳ್ಳಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.</p><p>ರಮೇಶ್ ಕುಮಾರ್ ಮತ್ತು ಸುನೀಲ್ ಎಂಬುವರು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ನಕಲಿ ಚಿನ್ನ ಮತ್ತು ದರೋಡೆ ಮಾಡಿದ್ದ ₹15 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p><p>ಆಂಧ್ರಪ್ರದೇಶದ ವಿಶ್ವಪ್ರಸಾದ ರೆಡ್ಡಿ ಎಂಬುವರಿಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ, ವಿಜಯಪುರ ಹೋಬಳಿಯ ರಾಷ್ಟ್ರೀಯ ಹೆದ್ದಾರಿ 7ರ ವೆಂಕಟಗಿರಿಕೋಟೆ ಬಡಾವಣೆಗೆ ಬುಧವಾರ ಕರೆಸಿಕೊಂಡಿದ್ದರು. ₹15 ಲಕ್ಷದೊಂದಿಗೆ ಬಂದ ವಿಶ್ವಪ್ರಸಾದ ಹಾಗೂ ಇಬ್ಬರು ಸ್ನೇಹಿತರ ಮೇಲೆ ಆರು ದರೋಡೆಕೋರರು ಹಲ್ಲೆ ಮಾಡಿ ₹15 ಲಕ್ಷ ಹಣ ದೋಚಿ ಪರಾರಿಯಾಗಿದ್ದರು. ವಿಜಯಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>