<p><strong>ವಿಜಯಪುರ (ದೇವನಹಳ್ಳಿ):</strong> ಹೋಬಳಿಯಾದ್ಯಂತ ಸಿಹಿ ಜೋಳ (ಸ್ವೀಟ್ ಕಾರ್ನ್) ತೋಟಗಳಲ್ಲಿ ಸೈನಿಕ ಹುಳ ಬಾಧೆ ಕಾಣಿಸಿಕೊಂಡಿದ್ದು, ಇದರಿಂದ ಕಂಗಾಲಾಗಿರುವ ರೈತರು ಬೆಳೆ ನಷ್ಟ ಅನುಭವಿಸುವ ಭೀತಿ</p>.<p>ಬೆಳೆಯುವ ಹಂತದಲ್ಲಿರುವಾಗಲೇಜೋಳದ ಸುಳಿ, ಎಲೆ, ಕಾಂಡವನ್ನು ತಿದ್ದು ಹಾಕುತ್ತಿರುವ ಸೈನಿಕ ಹುಳಗಳಿಂದ ಬೆಳೆ ಕುಂಠಿತವಾಗುತ್ತಿದೆ. ಕಾಳು ಕಟ್ಟುವ ಹಂತದಲ್ಲಿರುವ ತೆನೆಯಲ್ಲೂ ಹುಳ ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.</p>.<p>ಒಂದು ಎಕರೆ ಸಿಹಿ ಜೋಳ ಬೆಳೆಯಲು ಸುಮಾರು ₹30 ರಿಂದ ₹40 ಸಾವಿರ ಖರ್ಚು ಮಾಡಿದ್ದು, ಸೈನಿಕ ಹುಳ ನಿಯಂತ್ರಿಸಲು 3 ದಿನಗಳಿಗೊಮ್ಮೆ ರಾಸಾಯನಿಕ ಔಷಧಿ ಸಿಂಪಡಿಸಿದರೂ ಹುಳ ಬಾಧೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ತಮ ಬೆಳೆಯಾಗುವ ನಿರೀಕ್ಷೆಯಲ್ಲಿದ್ದ ನಮಗೆ ಬೆಳೆ ಕೈಕೊಡುವ ಆತಂಕ ಕಾಡುತ್ತಿದೆ ಎಂದು ವೆಂಕಟೇನಹಳ್ಳಿ ರೈತ ನಾಗರಾಜು ತಿಳಿಸಿದರು.</p>.<p>ಹಿಂದೆ ಒಂದೂವರೆ ಎಕರೆ ಪ್ರದೇಶದಲ್ಲಿ ಸಿಹಿ ಜೋಳ ಹಾಕಿದ್ದೇವು. ಸೈನಿಕ ಹುಳ ಬಾಧೆ ಅಷ್ಟಾಗಿ ಇರಲಿಲ್ಲ. ಈ ಸಾರಿ ಹೆಚ್ಚಾಗಿ ಸೈನಿಕ ಹುಳ ಬಾಧೆ ಕಾಣಿಸಿಕೊಂಡಿದ್ದು, ನಷ್ಟದ ಭೀತಿ ಎದುರಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ರೈತರಿಗೆ ಸಲಹೆ, ಸೂಚನೆಗಳನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-15-461097215</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ (ದೇವನಹಳ್ಳಿ):</strong> ಹೋಬಳಿಯಾದ್ಯಂತ ಸಿಹಿ ಜೋಳ (ಸ್ವೀಟ್ ಕಾರ್ನ್) ತೋಟಗಳಲ್ಲಿ ಸೈನಿಕ ಹುಳ ಬಾಧೆ ಕಾಣಿಸಿಕೊಂಡಿದ್ದು, ಇದರಿಂದ ಕಂಗಾಲಾಗಿರುವ ರೈತರು ಬೆಳೆ ನಷ್ಟ ಅನುಭವಿಸುವ ಭೀತಿ</p>.<p>ಬೆಳೆಯುವ ಹಂತದಲ್ಲಿರುವಾಗಲೇಜೋಳದ ಸುಳಿ, ಎಲೆ, ಕಾಂಡವನ್ನು ತಿದ್ದು ಹಾಕುತ್ತಿರುವ ಸೈನಿಕ ಹುಳಗಳಿಂದ ಬೆಳೆ ಕುಂಠಿತವಾಗುತ್ತಿದೆ. ಕಾಳು ಕಟ್ಟುವ ಹಂತದಲ್ಲಿರುವ ತೆನೆಯಲ್ಲೂ ಹುಳ ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.</p>.<p>ಒಂದು ಎಕರೆ ಸಿಹಿ ಜೋಳ ಬೆಳೆಯಲು ಸುಮಾರು ₹30 ರಿಂದ ₹40 ಸಾವಿರ ಖರ್ಚು ಮಾಡಿದ್ದು, ಸೈನಿಕ ಹುಳ ನಿಯಂತ್ರಿಸಲು 3 ದಿನಗಳಿಗೊಮ್ಮೆ ರಾಸಾಯನಿಕ ಔಷಧಿ ಸಿಂಪಡಿಸಿದರೂ ಹುಳ ಬಾಧೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ತಮ ಬೆಳೆಯಾಗುವ ನಿರೀಕ್ಷೆಯಲ್ಲಿದ್ದ ನಮಗೆ ಬೆಳೆ ಕೈಕೊಡುವ ಆತಂಕ ಕಾಡುತ್ತಿದೆ ಎಂದು ವೆಂಕಟೇನಹಳ್ಳಿ ರೈತ ನಾಗರಾಜು ತಿಳಿಸಿದರು.</p>.<p>ಹಿಂದೆ ಒಂದೂವರೆ ಎಕರೆ ಪ್ರದೇಶದಲ್ಲಿ ಸಿಹಿ ಜೋಳ ಹಾಕಿದ್ದೇವು. ಸೈನಿಕ ಹುಳ ಬಾಧೆ ಅಷ್ಟಾಗಿ ಇರಲಿಲ್ಲ. ಈ ಸಾರಿ ಹೆಚ್ಚಾಗಿ ಸೈನಿಕ ಹುಳ ಬಾಧೆ ಕಾಣಿಸಿಕೊಂಡಿದ್ದು, ನಷ್ಟದ ಭೀತಿ ಎದುರಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ರೈತರಿಗೆ ಸಲಹೆ, ಸೂಚನೆಗಳನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-15-461097215</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>