<p>ವಿಜಯಪುರ (ದೇವನಹಳ್ಳಿ): ಅಡುಗೆ ಅನಿಲ ಅಭಾವದಿಂದ ನಗರದ ಹೆಚ್ಚಿನ ಹೋಟೆಲ್ ಬಾಗಿಲು ಹಾಕಿದ ಕಾರಣ ತರಕಾರಿ ಕೊಳ್ಳುವವರಿಲ್ಲದೆ ತರಕಾರಿ, ಸೊಪ್ಪುಗಳ ಬೆಲೆಗಳು ಕುಸಿತ ಕಂಡಿವೆ.</p>.<p>ಹೆಚ್ಚಾಗಿ ಇಲ್ಲಿಯ ರೈತರು ತರಕಾರಿ, ಸೊಪ್ಪು ಬೆಳೆದು ಆದಾಯ ಗಳಿಸುತ್ತಾರೆ. ಆದರೆ, ಸದ್ಯದ ಸ್ಥಿತಿಯಲ್ಲಿ ಬಹುತೇಕ ತರಕಾರಿ ಬೆಲೆಗಳು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿವೆ. ಕೆಲವು ತರಕಾರಿ ಬೆಳೆಯಲು ಮಾಡಿದ ಖರ್ಚು ಕೂಡ ರೈತರಿಗ ಧಕ್ಕುತ್ತಿಲ್ಲ. ಕಳೆದ ಬೇಸಿಗೆಗೆ ಹೋಲಿಸಿದರೆ ಈ ಬಾರಿ ಎರಡರಿಂದ ಮೂರು ಪಟ್ಟು ಬೆಲೆ ಕುಸಿತಗೊಂಡಿದೆ ಎನ್ನುತ್ತಾರೆ ರೈತರು.</p>.<p>ಔಷಧಿ, ಗೊಬ್ಬರ ಸಿಂಪಡಣೆ, ಕೂಲಿ ಖರ್ಚು ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ತರಕಾರಿಯನ್ನು ಮಾರುಕಟ್ಟೆಯಲ್ಲಿ ಕೇಳಿದಷ್ಟು ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ರೈತರು.</p>.<p>‘ಮುಕ್ಕಾಲು ಎಕರೆಗೆ ಐದೂವರೆ ಸಾವಿರ ನಾರು ಕ್ಯಾಪ್ಸಿಕಂ ನಾಟಿ ಮಾಡಿ, ಚೆನ್ನಾಗಿ ಬೆಳೆದಿದ್ದೇವೆ. ಒಂದು ನಾರು ₹10 ಆಗುತ್ತದೆ.</p>.<p>ಔಷಧಿ, ಗೊಬ್ಬರ, ನೆಟ್ ಹೌಸ್ ಮಾಡಲು ಸುಮಾರು ₹3 ಲಕ್ಷ ಖರ್ಚು ಬಂದಿದೆ. 1 ತಿಂಗಳಿನಿಂದ 7 ಬಾರಿ ಕೊಯ್ಲು ಆಗಿದೆ. ಈಗ ಕೆ.ಜಿ.ಗೆ ₹25 ರಿಂದ ₹30 ದರ ಇದೆ. ಈ ಬೆಲೆಗೆ ಮಾರಾಟವಾದರೆ ಹಾಕಿದ ಬಂಡವಾಳ ಸಿಗುವುದಿಲ್ಲ' ಎಂದು ಮಂಡಿಬಲೆ ರೈತ ಮಧು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-15-1582375505</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ (ದೇವನಹಳ್ಳಿ): ಅಡುಗೆ ಅನಿಲ ಅಭಾವದಿಂದ ನಗರದ ಹೆಚ್ಚಿನ ಹೋಟೆಲ್ ಬಾಗಿಲು ಹಾಕಿದ ಕಾರಣ ತರಕಾರಿ ಕೊಳ್ಳುವವರಿಲ್ಲದೆ ತರಕಾರಿ, ಸೊಪ್ಪುಗಳ ಬೆಲೆಗಳು ಕುಸಿತ ಕಂಡಿವೆ.</p>.<p>ಹೆಚ್ಚಾಗಿ ಇಲ್ಲಿಯ ರೈತರು ತರಕಾರಿ, ಸೊಪ್ಪು ಬೆಳೆದು ಆದಾಯ ಗಳಿಸುತ್ತಾರೆ. ಆದರೆ, ಸದ್ಯದ ಸ್ಥಿತಿಯಲ್ಲಿ ಬಹುತೇಕ ತರಕಾರಿ ಬೆಲೆಗಳು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿವೆ. ಕೆಲವು ತರಕಾರಿ ಬೆಳೆಯಲು ಮಾಡಿದ ಖರ್ಚು ಕೂಡ ರೈತರಿಗ ಧಕ್ಕುತ್ತಿಲ್ಲ. ಕಳೆದ ಬೇಸಿಗೆಗೆ ಹೋಲಿಸಿದರೆ ಈ ಬಾರಿ ಎರಡರಿಂದ ಮೂರು ಪಟ್ಟು ಬೆಲೆ ಕುಸಿತಗೊಂಡಿದೆ ಎನ್ನುತ್ತಾರೆ ರೈತರು.</p>.<p>ಔಷಧಿ, ಗೊಬ್ಬರ ಸಿಂಪಡಣೆ, ಕೂಲಿ ಖರ್ಚು ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ತರಕಾರಿಯನ್ನು ಮಾರುಕಟ್ಟೆಯಲ್ಲಿ ಕೇಳಿದಷ್ಟು ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ರೈತರು.</p>.<p>‘ಮುಕ್ಕಾಲು ಎಕರೆಗೆ ಐದೂವರೆ ಸಾವಿರ ನಾರು ಕ್ಯಾಪ್ಸಿಕಂ ನಾಟಿ ಮಾಡಿ, ಚೆನ್ನಾಗಿ ಬೆಳೆದಿದ್ದೇವೆ. ಒಂದು ನಾರು ₹10 ಆಗುತ್ತದೆ.</p>.<p>ಔಷಧಿ, ಗೊಬ್ಬರ, ನೆಟ್ ಹೌಸ್ ಮಾಡಲು ಸುಮಾರು ₹3 ಲಕ್ಷ ಖರ್ಚು ಬಂದಿದೆ. 1 ತಿಂಗಳಿನಿಂದ 7 ಬಾರಿ ಕೊಯ್ಲು ಆಗಿದೆ. ಈಗ ಕೆ.ಜಿ.ಗೆ ₹25 ರಿಂದ ₹30 ದರ ಇದೆ. ಈ ಬೆಲೆಗೆ ಮಾರಾಟವಾದರೆ ಹಾಕಿದ ಬಂಡವಾಳ ಸಿಗುವುದಿಲ್ಲ' ಎಂದು ಮಂಡಿಬಲೆ ರೈತ ಮಧು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-15-1582375505</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>