ಮೂತ್ರ ವಿಸರ್ಜನೆಯ ಬೇಸಿನ್ಗಳು ಒಡೆದು, ಕಿತ್ತುಹೋಗಿವೆ. ಇಲ್ಲಿ ನೀರಿನ ವ್ಯವಸ್ಥೆಯಿಲ್ಲದ ಕಾರಣ ಸ್ವಚ್ಚವಾಗಿಲ್ಲ. ಮೂತ್ರ ಹೊರಗೆ ಹೋಗಲು ಅವಕಾಶವಿಲ್ಲದ ಕಾರಣ ದುರ್ವಾಸನೆ ಹೆಚ್ಚಾಗಿದೆ. ಒಳಗೆ ಕಲ್ಲುಗಳು, ಪ್ಲಾಸ್ಟಿಕ್ ಕವರ್ಗಳು ಬಿದ್ದಿವೆ. ಸಮೀಪದಲ್ಲೆ ಗಂಗಾತಾಯಿ ದೇವಾಲಯವಿದೆ. ಇಲ್ಲಿಗೆ ಪೂಜೆಗೆ ಬರುವಂತಹ ಭಕ್ತರು ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ಪೂಜೆ, ಪುನಸ್ಕಾರ ಮಾಡಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.