’23 ನೇ ವಾರ್ಡಿನ ರಹಮತ್ ನಗರದಲ್ಲಿನ ಚರಂಡಿ ವ್ಯವಸ್ಥೆ ಸಾರ್ವಜನಿಕರಿಗೆ ನೋವು ಉಂಟು ಮಾಡಿದೆ. ಮನೆಗಳಿಗೆ ಕಾಂಪೌಂಡ್ ನಿರ್ಮಿಸಿಕೊಂಡು, ಎಲ್ಲೆಂದರಲ್ಲಿ ಕಸದ ರಾಶಿಯನ್ನು ಹಾಕುತ್ತಾರೆ. ಸಂಚಾರ ಮಾಡಲಿಕ್ಕೂ ಸಾಧ್ಯವಾಗದ ರಸ್ತೆಗಳಿಂದಾಗಿ ಇಲ್ಲಿನ ಜನರು ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುವಂತಾಗಿದೆ. ಪುರಸಭೆ ಇತಿಹಾಸದಲ್ಲಿ ಚರಂಡಿಗಳು, ರಸ್ತೆಗಳು, ರಾಜಕಾಲುವೆಗಳು ಇಷ್ಟೊಂದು ಹಾಳಾಗಿರುವ ಇದೇ ಮೊದಲ ಬಾರಿ’ ಎಂದು ಹೇಳಿದರು.