30ರಿಂದ 40 ವರ್ಷಗಳ ಹಿಂದೆ ಒಂದೆರಡು ಬಾರಿ ಕೆರೆ ತುಂಬಿದರೆ ಸಾಕು. ನೀರು ಸೇದುವ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕೈಗೆಟಕುವಂತಿತ್ತು. ಈಗ 1,200ರಿಂದ 1,400 ಅಡಿ ಆಳ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಬಳಕೆಗಿಂತ ದುಪ್ಪಟ್ಟು ನೀರನ್ನು ವ್ಯರ್ಥ ಮಾಡುತ್ತಿದ್ದೇವೆ. ನಲ್ಲಿಗಳಲ್ಲಿ ವ್ಯರ್ಥವಾಗಿ ಹರಿ ಬಿಡುವುದು, ಕೊಳಾಯಿಯಿಂದಲೇ ಪೈಪ್ ಜೋಡಣೆ ಮಾಡಿ ವಾಹನಗಳನ್ನು ತೊಳೆಯುವುದು, ಮನೆಯ ಮೇಲಿನ ಟ್ಯಾಂಕರ್ ತುಂಬಿ ನೀರು ಹೊರ ಹೋಗುತ್ತಿದ್ದರೂ ಅದರ ಬಗ್ಗೆ ಲಕ್ಷ್ಯ ವಹಿಸದಿರುವುದು ನಿರನ್ನು ವೃಥಾ ಪೋಲು ಮಾಡಿದಂತೆ. ಹೀಗೆ ಮಾಡಿದರೆ ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ನೀರು ಸಿಗುವುದಾದರು ಹೇಗೆ ಎಂದು ಕನ್ನಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.