ತಾಲ್ಲೂಕಿನ ಗುಂಡಮಗೆರೆ, ದೊಡ್ಡತುಮಕೂರು, ಅರಳುಮಲ್ಲಿಗೆ ಕೆರೆಗಳ ಅಂಗಳಕ್ಕು ಮಳೆ ನೀರು ಹರಿದು ಬಂದಿವೆ. ರಾಗಿ, ಮುಸುಕಿನ ಜೋಳದ ಬೆಳೆ ಉತ್ತಮವಾಗಿ ಬೆಳೆದಿದ್ದು ಇದೇರೀತಿ ಇನ್ನು15 ದಿನಗಳ ನಂತರ ಎರಡು ಮಳೆಯಾದರೂ ಉತ್ತಮ ರಾಗಿ ಬೆಳೆ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕಾಡನೂರು ಮೂರ್ತಿ.