ಸೂಲಿಬೆಲೆ: ‘ಗ್ರಾಮದ ಜನರು ಉಪ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸಿ ಶಾಸಕನಾಗಿ ಆಯ್ಕೆ ಮಾಡಿದರೆ, ಇಲ್ಲಿ 25 ಎಕರೆ ಜಮೀನಿನಲ್ಲಿ ಸೈಟುಗಳನ್ನು ಮಾಡಿ ಬಡವರಿಗೆ ವಿತರಿಸುತ್ತೇನೆ. ಇದು ಸುಳ್ಳು ಭರವಸೆ ಅಲ್ಲ. ನಾನು ಛಲವಾದಿ. ಮಾಡಬೇಕು ಎಂದ ಕೆಲಸವನ್ನು ಸಾಧಿಸಿ ತೋರಿಸುತ್ತೇನೆ’ ಎಂದು ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದರು.