ಈ ಸಂಬಂಧ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ‘ಬುಧವಾರ ರಾತ್ರಿ ಮೃತಳ ತಂಗಿಗೆ ಕರೆ ಮಾಡಿದ್ದ ನರಸಿಂಹ ಮೂರ್ತಿ, ನಿನ್ನ ಅಕ್ಕ ನೇಣು ಬಿಗಿದುಕೊಳ್ಳಲು ಹೋಗಿದ್ದಾಳೆ. ಬಂದು ಬುದ್ಧಿ ಹೇಳುವಂತೆ ಕೇಳಿಕೊಂಡಿದ್ದ. ಆದರೆ, ಆಗಾಗ ಪಾನಮತ್ತರಾಗಿ ಈ ರೀತಿ ಜಗಳ ಮಾಡಿಕೊಳ್ಳುವುದು ಸಾಮಾನ್ಯ ಎಂಬ ಕಾರಣಕ್ಕೆ ಸಂತ್ರಸ್ತೆಯ ತಂಗಿ ಇದನ್ನು ಉಪೇಕ್ಷಿಸಿದ್ದಳು. ಗುರುವಾರ ಮಧ್ಯಾಹ್ನ ಆಕೆಯ ಮೃತದೇಹ ಮನೆಯಲ್ಲಿ ಕಂಡುಬಂದಿದೆ’ ಎಂದಿದ್ದಾರೆ.