ದೊಡ್ಡಬಳ್ಳಾಪುರ: ಮಾನವ ಕಳ್ಳಸಾಗಣೆಗೆ ಒಳಗಾಗಿದ್ದ 15ಮಂದಿ ಕಾರ್ಮಿಕರನ್ನು ಮುಪ್ಪಡಿಘಟ್ಟ ತೋಟದಿಂದ ರಕ್ಷಣೆ ಮಾಡಲಾಗಿದೆ. ಇದರಲ್ಲಿ ಕೆಲ ಬಾಲಕಾರ್ಮಿಕರು ಇದ್ದಾರೆ. ಸಂತ್ರಸ್ತರು ಎರಡು ವರ್ಷಗಳಿಂದ ನೀಲಗಿರಿ ಮರಕಡಿಯುವ ಕೆಲಸ ಮಾಡುತ್ತಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳ ನೀಲಗಿರಿ ತೋಪುಗಳಲ್ಲೂ ದುಡಿಯಲು ಸಾಗಣೆ ಮಾಡಲಾಗುತ್ತಿತ್ತು. ಪೊಲೀಸ್ ಇಲಾಖೆ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್ ಎನ್ಜಿಒ ನೆರವಿನೊಂದಿಗೆ ಈ ಕಾರ್ಮಿಕರನ್ನು ರಕ್ಷಿಸಲಾಗಿದೆ. ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.