ಹೊಸಕೋಟೆ: ಇಲ್ಲಿನ ಅಮಾನಿದೊಡ್ಡಕೆರೆಯ ಬಳಿ ಭಾನುವಾರರಾತ್ರಿ ಪವನ್ (33) ಎಂಬ ಯುವಕನ ಕೊಲೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ತೇಜಸ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಇಬ್ಬರೂ ಒಬ್ಬ ಹುಡುಗಿಯನ್ನು ಪ್ರೇಮಿಸುತ್ತಿದ್ದರು. ಅದೇ ವಿಷಯವಾಗಿ ಇಬ್ಬರೂ ಜಗಳವಾಡಿದ್ದರು. ಕಳೆದ ರಾತ್ರಿ ಕುಡಿದ ಅಮಲಿನಲ್ಲಿ ಕೊಲೆ ನಡೆದಿದೆ ಎಂದು ಪೊಲಿಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.