ರಾಜು ಸ್ನೇಹಿತ ಉಮೇಶ್ ಹಾಗೂ ಕೆಂಪರಾಜು ನಡುವೆ ಶನಿವಾರ ಮಧ್ಯಾಹ್ನ ಗಲಾಟೆ ನಡೆದಿತ್ತು. ಸ್ಥಳೀಯರ ಮಧ್ಯಸ್ಥಿಕೆಯಿಂದ ಗಲಾಟೆ ತಣ್ಣಗಾಗಿತ್ತು. ಆದರೆ, ರಾತ್ರಿ ಗಲಾಟೆ ನಡೆದಿದ್ದ ಜಾಗದಿಂದ ಸ್ವಲ್ಪದೂರದಲ್ಲಿ ರಾಜು ಮತ್ತು ಉಮೇಶ್ ಮಾತನಾಡುತ್ತಾ ನಿಂತಿದ್ದರು. ಆ ವೇಳೆ ಏಕಾಏಕಿ ಕೆಂಪರಾಜು ಮತ್ತು ಆತನ ಸ್ನೇಹಿತರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ರಾಜು ಅವರನ್ನು ಕೊಲೆ ಮಾಡಲಾಗಿದ್ದು, ಉಮೇಶ್ ಮೇಲೆ ಹಲ್ಲೆ ನಡೆಸಲಾಗಿದೆ.ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕೆಂಪರಾಜುನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.