‘ಬ್ಯಾಂಕ್ನವರೆ ಸಾಲ ಮನ್ನಾ ಆಗಿದೆ ಎಂದು ಬ್ಯಾಂಕ್ಗೆ ಕರೆಸಿಕೊಂಡು ದಾಖಲೆಗಳೆಲ್ಲ ತೆಗೆದುಕೊಂಡರು. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಡುಗಡೆ ಪತ್ರವನ್ನೂ ಕಳುಹಿಸಿಕೊಟ್ಟಿದ್ದರು. ಇದರಿಂದ ನಾನು ಧೈರ್ಯವಾಗಿದ್ದೆ. ಈಗ ಋಣ ಸಮಾಧಾನ ಯೋಜನೆ 2019-20 (ಅನುತ್ಪಾದಕ ಆಸ್ತಿ ಮತ್ತು ಎ.ಯು.ಸಿ.ಎ ಕಂತು) ಏಕಕಾಲದಲ್ಲಿ ಒಂದೇ ಬಾರಿಗೆ ಇತ್ಯರ್ಥಗೊಳಿಸುವಿಕೆ ಯೋಜನೆ ಡಿ.31 ಕ್ಕೆ ಕೊನೆಗೊಳ್ಳಲಿದ್ದು, ಅಷ್ಟರೊಳಗೆ ತೀರುವಳಿ ಮಾಡಿ ಎಂದು ನೋಟಿಸ್ ಕಳುಹಿಸುತ್ತಿರುವುದರಿಂದ ಆತಂಕ ಶುರುವಾಗಿದೆ. ಯಾವುದರಲ್ಲಿ ಸಾಲ ತೀರಿಸಲಿ. ಏನಾದರು ಮಾಡಿ, ನನ್ನನ್ನು ಸಾಲದಿಂದ ಮುಕ್ತನನ್ನಾಗಿಸಿ’ ಎಂದು ನೋವು ತೋಡಿಕೊಂಡರು.