‘ಕಡಲೆಕಾಯಿ ಪರಿಷೆ ಬೆಂಗಳೂರು ಸೇರಿದಂತೆ ನಮ್ಮ ಬಸವನಗುಡಿಗೆ ಹೆಮ್ಮೆಯ ಸಂಕೇತ. ಪರಿಷೆ ನೋಡಲು ಸಾವಿರಾರು ಮಂದಿ ಸೇರುತ್ತಿದ್ದರು. ಕಡಲೆಕಾಯಿ ಮಳಿಗೆಗಳನ್ನು ರಾಜ್ಯ ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ತೆರೆಯುತ್ತಿದ್ದರು. ಇದಕ್ಕೆಲ್ಲ ಕೊರೊನಾ ಅಡ್ಡಿಪಡಿಸಿತು. ಸೋಂಕು ನಿರ್ಮೂಲನೆಗೊಂಡು, ಮುಂದಿನ ವರ್ಷ ವಿಜೃಂಭಣೆಯಿಂದ ಪರಿಷೆ ಆಚರಿಸೋಣ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.