ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಯುವ ಜನರನ್ನು ಹಾಳುಮಾಡುತ್ತಿದೆ ಎಂದು ದೂರುತ್ತೇವೆ. ಆದರೆ, ಇಂತಹ ತಂತ್ರಜ್ಞಾನದ ಫಲವಾಗಿಯೇ ಇಂದು ಸಾಕಷ್ಟು ವೇಗದ ಪ್ರಗತಿ ಸಾಧಿಸಲಾಗಿದೆ. ಯಾವುದೇ ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡರೆ ಪ್ರಗತಿ ಸಾಧ್ಯ. ದುರ್ಬಳಕೆ ಮಾಡಿಕೊಂಡರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.