‘ನಿತ್ಯ ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಹಾಗೂ ನಗರ ಬಸ್ ನಿಲ್ದಾಣದಿಂದ ಸಂಜೆ 5ರವರೆಗೆ ಸರಾಸರಿ 536 ಬಸ್ಗಳು ಕಾರ್ಯಾಚರಿಸುತ್ತವೆ. ಆದರೆ, 79 ಬಸ್ಗಳು ಮಾತ್ರ ಸಂಚರಿಸಿವೆ. ಇವುಗಳಲ್ಲಿ ಎಲ್ಲವೂ ಭರ್ತಿಯಾಗಿಲ್ಲ. ಕೊಲ್ಹಾಪುರ, ಸೊಲ್ಲಾಪುರ ಮೊದಲಾದ ಕಡೆಗಳಿಗೆ ಬಸ್ಗಳನ್ನು ಕಳುಹಿಸಲಾಗಿತ್ತು. ಬಹುತೇಕ ಬಸ್ಗಳ ಸೇವೆ ಸ್ಥಗಿತಗೊಂಡಿತ್ತು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.