‘166 ಕಿ.ಮೀ. ರಸ್ತೆ, 40 ಕಿ.ಮೀ. ನಾಲೆ, 112 ಕಿ.ಮೀ. ಚರಂಡಿ ಮಾರ್ಗ, 428 ಬೀದಿದೀಪಗಳು, ಕುಡಿಯುವ ನೀರು ಪೂರೈಕೆ ಮಾರ್ಗಗಳಿಗೆ ಹಾನಿಯಾಗಿದೆ. ನಗರಪಾಲಿಕೆ ವ್ಯಾಪ್ತಿಯೊಂದರಲ್ಲೇ ₹ 400 ಕೋಟಿಗೂ ಹೆಚ್ಚಿನ ಹಾನಿಯಾಗಿದೆ. ಇದಲ್ಲದೇ, ಈ ಕ್ಷೇತ್ರಗಳಲ್ಲಿ 2,900ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. 7,500 ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದೇವೆ’ ಎಂದು ಅಭಯ ತಿಳಿಸಿದರು.