‘ಮಹಾನಗರ ಪಾಲಿಕೆಯ ಎದುರು ಅನುಮತಿ ಪಡೆಯದೆ ಧ್ವಜ ಸ್ತಂಭ ಸ್ಥಾಪಿಸಿ, ಕನ್ನಡ ಬಾವುಟ ಹಾರಿಸಲಾಗಿದೆ. ಈ ಕುರಿತು ಚರ್ಚಿಸಲು ಕನ್ನಡ ಹೋರಾಟಗಾರರನ್ನು ಕರೆದಿದ್ದೆವು. ಆದರೆ ಅವರು ಮಾತುಕತೆಗೆ ಬಂದಿಲ್ಲ. ಶೀಘ್ರದಲ್ಲಿಯೇ ಈ ಕುರಿತು ಸಭೆ ಕರೆದು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.