ಘಟಿಕೋತ್ಸವ ಭಾಷಣ ಮಾಡಿದ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ, ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್, ‘ಇಂದಿನ ಜೀವನದಲ್ಲಿ ಬಹು ಕೌಶಲಗಳು, ಜ್ಞಾನ ಹಾಗೂ ಅರಿವಿನ ಅಗತ್ಯತೆ ಇದೆ. ನಾನು ಮೊದಲು ಭೌತಶಾಸ್ತ್ರಜ್ಞನಾಗಿದ್ದೆ. ನಂತರ ಬಾಹ್ಯಾಕಾಶ ತಂತ್ರಗಳನ್ನು ಕಲಿತೆ, ಸಿಸ್ಟಮ್ ನಿರ್ವಹಣೆ ಕಲಿತೆ, ಇಸ್ರೊ ಅಧ್ಯಕ್ಷ ಸ್ಥಾನ ನನ್ನನ್ನು ಹುಡುಕಿಕೊಂಡು ಬಂದಾಗ, ಕೇವಲ ವಿಜ್ಞಾನ– ತಂತ್ರಜ್ಞಾನ ಅಷ್ಟೇ ಅಲ್ಲ, ಸಾಮಾಜಿಕ– ಆರ್ಥಿಕ ದೃಷ್ಟಿಕೋನವನ್ನೂ ಕಲಿತೆ’ ಎಂದು ಹೇಳಿದರು.