‘ಅಲ್ಲಿ ಉದ್ಯಾನ ಹಾಗೂ ಶಾಲೆ ನಿರ್ಮಿಸಲು ಮೀಸಲಿರಿಸಿದ್ದ ಜಾಗದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಅತಿಕ್ರಮಣ ತೆರವುಗೊಳಿಸುವಂತೆ ನೋಟಿಸ್ ನೀಡಿದರೂ ಸ್ಪಂದಿಸಿರಲಿಲ್ಲ. ನಮ್ಮ ಜಾಗದಲ್ಲಿ ಕೆಲವರು ಸಣ್ಣದೊಂದು ಗುಡಿ ಕಟ್ಟಿದ್ದರು. ಬಳಿಕ ದೊಡ್ಡದಾಗಿ ನಿರ್ಮಿಸಿದ್ದರು (ಶೀಟ್ಗಳನ್ನು ಬಳಸಿ). ನಂತರ ಕೆಲವರು 11 ಮನೆಗಳನ್ನು (ತಗಡಿನ ಶೀಟ್ಗಳಿಂದ) ನಿರ್ಮಿಸಿದ್ದಾರೆ. ಅದನ್ನು ಬಾಡಿಗೆಗೂ ಕೊಟ್ಟಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಅತಿಕ್ರಮಣ ತೆರವುಗೊಳಿಸಲು ಕ್ರಮ ವಹಿಸಲಾಗಿದೆ’ ಎಂದು ನಗರಪಾಲಿಕೆ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ನಿಪ್ಪಾಣಿಕರ ‘ಪ್ರಜಾವಾಣಿ’ಗೆ ತಿಳಿಸಿದರು.