ಈ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಬಂದಿದ್ದರು. ಈ ಆಲ್ಬಮ್ಗೆ ಸಂಗೀತ ನೀಡಿದವರು, ನಿರ್ದೇಶನ ಮಾಡಿದವರು ಹಿಂದೂಸ್ತಾನಿ ಗಾಯಕ ಶರಣ್ ಚೌಧರಿ. ಅನುರಾಧಾ ಭಟ್ ಮತ್ತು ಕೆ. ರುಮಿತ್ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಆಲ್ಬಮ್ನಲ್ಲಿ ರುಮಿತ್ ಅವರು ನಟಿಸಿದ್ದಾರೆ. ಅವರ ಜೊತೆ ಧನುಶ್ರೀ ಅವರೂ ಹೆಜ್ಜೆ ಹಾಕಿದ್ದಾರೆ.