‘ಹಲವು ವರ್ಷಗಳಿಂದಲೂ ನಾವು ಇಲ್ಲಿದ್ದೇವೆ. ನಿವೇಶನ ದೊರೆತಿಲ್ಲ. ಸಂಸದರು, ಶಾಸಕರು, ಪುರಸಭೆ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇವೆ. ಪುರಸಭೆಗೆ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದೇವೆ. ಇದರಿಂದ ಪ್ರಯೋಜನವಾಗಿಲ್ಲ. ನಮಗೆ ಬೇರೆ ಕಡೆ ಜಾಗವಿಲ್ಲ. ಹೀಗಾಗಿ, ಇಲ್ಲಿಯೇ ಇದ್ದೇವೆ. ಸರ್ಕಾರ ನಮಗೆ ಮನೆ ಕಟ್ಟಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ನಿವಾಸಿ ನಾಗರಾಜ ಬಾಗಡಿ ಕೋರಿದರು.