ಇಲಾಖೆ ಅಧಿಕಾರಿಗಳು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದ ಕಾರಣ ಇಲ್ಲಿಯ ನಿವಾಸಿಗಳು ಪರಿತಪಿಸಬೇಕಾಗಿದೆ. ಹೊಟೇಲ್ ಮಾಲೀಕರು, ಸ್ಥಳೀಯರು ದ್ವಿಚಕ್ರ ವಾಹನದ ಮೇಲೆ ನದಿಗೆ ಹೋಗಿ ನೀರು ತರುವ ಸನ್ನಿವೇಶ ಬಂದಿದೆ. ಅಧಿಕಾರಿಗಳನ್ನು ಕೇಳಿದರೆ ಪಂಪ್ ಸೆಟ್ ಹಾಳಾಗಿದೆ, ದುರಸ್ತಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ನಿವಾಸಿಗಳ ಸಹನೆ ಕಟ್ಟೆ ಒಡೆಯುವ ಮುನ್ನ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.