ಅಪ್ಪಯ್ಯ ಮಲ್ಲಪ್ಪ ಶೆಲಾರ ಹಲ್ಲೆಗೊಳಗಾದವರು. ಈ ಕುರಿತು ಶೆಡ್ನ ಮಾಲೀಕರಾದ ಪ್ರಿಯಾ ಪುಂಡಲೀಕ ಸೋಮನಟ್ಟಿ ದೂರು ನೀಡಿದ್ದರು. ಎಸಿಪಿ ಕೆ. ಶಿವಾರೆಡ್ಡಿ ಹಾಗೂ ಇನ್ಸ್ಪೆಕ್ಟರ್ ಎಲ್.ಎಚ್. ಗೌಂಡಿ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ, ಕೇದನೂರ ಗ್ರಾಮದ ಅನಿಲ ರಾಜು ಗುಡಗ್ಯಾನಟ್ಟಿ ಪರಾಯಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್ ತಿಳಿಸಿದ್ದಾರೆ.