‘ನವ್ಯ, ನವ್ಯೋತ್ತರದ ಕಾವ್ಯ ಭಾಷೆಯು ಪ್ರತಿಮಾತ್ಮಕ ಮಾತ್ರವಲ್ಲದೇ ಇಂದಿನ ಸಂಕೀರ್ಣ ಬದುಕಿನ ಪ್ರತಿಬಿಂಬದಂತೆ ಇದೆ. ಕಾವ್ಯಾರಾಧಕರ ಚಿಂತನೆಯ ತೀಕ್ಷ್ಣತೆ, ತೀವ್ರತೆಯನ್ನು ಚುರುಕುಗೊಳಿಸುವಂತಿದೆ. ನಿವೃತ್ತ ಶಿಕ್ಷಕಿ ಯಮುನಾ ಕಂಬಾರ ಅವರ ಕಾವ್ಯವು ಪ್ರಚಲಿತ ವಿದ್ಯಮಾನಗಳ ಧ್ಯಾನಸ್ಥ ಅವಲೋಕನವಾಗಿದೆ. ವ್ಯವಸ್ಥೆಯ ಅಸ್ತವ್ಯಸ್ತ ಸ್ಥಿತಿಯನ್ನು ಸಾಮೂಹಿಕ ಧ್ವನಿಯಾಗಿ ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.