ಗೋಮಟೇಶ ವಿದ್ಯಾಪೀಠದ ‘ಡಿ’ ಗ್ರೂಪ್ ನೌಕರ, ಅಲಾರವಾಡದ ನಿವಾಸಿ ಸಣ್ಣಕಲ್ಲಪ್ಪ ಜನಗೌಡ ಎನ್ನುವವರು ದೂರು ನೀಡಿದ್ದರು. ‘ಸೋಮವಾರ ಸಂಜೆ ಕೆಲಸ ಮುಗಿಸಿ 5.20ರ ಸುಮಾರಿಗೆ ಹೋಗುವಾಗ ಇಬ್ಬರು ನಂಬರ್ ಪ್ಲೇಟ್ ಇಲ್ಲದ ಸುಜುಕಿ ಅಕ್ಸೆಸ್ ಸ್ಕೂಟರ್ನಲ್ಲಿ ಬಂದು ತಡೆದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯು ನನಗೆ ಚಾಕು ತೋರಿಸಿ ಜೇಬಿನಲ್ಲಿರುವ ಹಣ ಕೊಡುವಂತೆ ಹೆದರಿಸಿದ. ಇನ್ನೊಬ್ಬ ಕರವಸ್ತ್ರವನ್ನು ಕೊರಳಿಗೆ ಹಾಕಿ ಬಿಗಿದು, ಶರ್ಟ್ನ ಜೇಬಿನಲ್ಲಿದ್ದ ₹ 14,500 ಮೌಲ್ಯದ ಮೊಬೈಲ್ ಫೋನ್ ಕಿತ್ತುಕೊಂಡ. ಆಗ ಬಂದ ಇನ್ನೊಬ್ಬ ಪ್ಯಾಂಟ್ನ ಜೇಬಿನಲ್ಲಿದ್ದ ₹ 2ಸಾವಿರ ಕಿತ್ತುಕೊಂಡ. ಇದನ್ನು ಕಂಡ ಸ್ಥಳೀಯರು ಬಂದು ಅವರನ್ನು ಹಿಡಿದು ಹಲ್ಲೆ ನಡೆಸಿದರು. ಈ ವೇಳೆ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾದರು’ ಎಂದು ದೂರಿನಲ್ಲಿ ತಿಳಿಸಿದ್ದರು.