ತುಮಕೂರು ಜಿಲ್ಲೆಯ ಶಿರಾದ ಗೋವಿಂದರಾಜು ಹಲ್ಲೆಗೊಳಗಾದವರು. ಟೋಲ್ನಲ್ಲಿ ಅವರು ತಡೆದಿದ್ದ ಆರೋಪಿಗಳು, ಮರಾಠಿಯಲ್ಲಿ ಮಾತನಾಡುವಂತೆ ಬಲವಂತಪಡಿಸಿದ್ದರು. ಮರಾಠಿ ಗೊತ್ತಿಲ್ಲ ಎಂದಿದ್ದಕ್ಕೆ ಅರೆಬೆತ್ತಲೆಯಾಗಿಸಿ ಥಳಿಸಿದ್ದರು. ಗೋವಿಂದರಾಜು ಈ ವಿಷಯವನ್ನು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಆಶೋಕ ಚಂದರಗಿ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಚಂದರಗಿ, ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಗಮನಕ್ಕೆ ತಂದಿದ್ದರು.