ತಾಲ್ಲೂಕಿನ ದೇಸೂರದ ಎಂ.ಜಿ. ಆಟೊಮೋಟಿವ್ ಬಸ್ ಅಂಡ್ ಕೋಚ್ ಕಂಪನಿಯ ಪ್ರಕಾಶ ಸರ್ವಿ ಎನ್ನುವವರು ಮಾರ್ಚ್ 12ರಂದು ದೂರು ನೀಡಿದ್ದರು. ತಮ್ಮ ಎಂ.ಜಿ. ಸಮೂಹದ ಫೈನಾನ್ಸಿಯಲ್ ಕಂಟ್ರೋಲರ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ಭವ್ಯಹರೇನ್, ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಕಂಪನಿಯಿಂದ ಆರ್ಟಿಜಿಎಸ್ ಮೂಲಕ ₹ 4.41 ಕೋಟಿಯನ್ನು ಪಡೆದುಕೊಂಡಿದ್ದಾರೆ. ಕೊಡಬೇಕಾದ ಕಂಪನಿಗಳಿಗೆ ಹಣವನ್ನು ಕೊಡದೆ, ಕಂಪನಿಗೂ ಮರಳಿಸದೆ ತನ್ನ ಮತ್ತು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.