ಗ್ರಾಮೀಣ ಠಾಣೆ ಪಿಐ ಸುನೀಲ ನಂದೇಶ್ವರ ಹಾಗೂ ಸಿಬ್ಬಂದಿ ತಾಲ್ಲೂಕಿನ ಯಳ್ಳೂರದ ಚಾಂಗಳೇಶ್ವರ ಮಂದಿರ ಹತ್ತಿರ ಮಟ್ಕಾ ಆಡುತ್ತಿದ್ದ ಕಲ್ಮೇಶ್ವರ ಗಲ್ಲಿಯ ಮಯೂರ ಕದಮ ಎನ್ನುವವರನ್ನು ವಶಕ್ಕೆ ಪಡೆದು ₹ 5,250 ಹಣ ಜಪ್ತಿ ಮಾಡಿದ್ದಾರೆ. ಬೆನಕನಹಳ್ಳಿ ಗ್ರಾಮದ ಬಸ್ ನಿಲ್ದಾಣ ಬಳಿ ಮಟ್ಕಾ ಜೂಜಾಡುತ್ತಿದ್ದ ನಾಗೇಶ ದೇಸೂರಕರ ಹಾಗೂ ಶ್ರೀಕಾಂತ ಬೆನಕೆ ಎನ್ನುವವರನ್ನು ವಶಕ್ಕೆ ಪಡೆದು ಅವರಿಂದ ₹ 4,750 ಜಪ್ತಿ ಮಾಡಿದ್ದಾರೆ.