ಬೆಳಗಾವಿ: ಐಟಿಐ ಕೋರ್ಸ್ನ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ಜಿಲ್ಲೆಯ ರಾಮದುರ್ಗ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಮತ್ತು ಅಲ್ಲಿನ ಸಿಪಾಯಿ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಗುರುವಾರ ಬಿದ್ದಿದ್ದಾರೆ.
ಪರೀಕ್ಷಾ ಕೇಂದ್ರದ ಮುಖ್ಯಸ್ಥರೂ ಆಗಿದ್ದ ರಾಮನಗೌಡ ಬಾಬಾಗೌಡ ಪಾಟೀಲ ಮತ್ತು ಬಸವರಾಜ ರಾಮಪ್ಪ ಮೋಹಿತೆ ಬಲೆಗೆ ಬಿದ್ದವರು.
ಅದೇ ತಾಲ್ಲೂಕಿನ ತುರನೂರದ ವಿಶ್ವಚೇತನ ಐಟಿಐ ಕಾಲೇಜಿನ ಸುಧೀರ ಸಿದ್ದನಕೊಳ್ಳ ಅವರು ದೂರು ನೀಡಿದ್ದರು. ದ್ವಿತೀಯ ವರ್ಷದ 14 ಪರೀಕ್ಷಾರ್ಥಿಗಳನ್ನು ಪಾಸ್ ಮಾಡಲು ಆರೋಪಿಗಳು ₹ 14 ಸಾವಿರ ಲಂಚ ಪಡೆಯುವಾಗಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್. ನ್ಯಾಮಗೌಡರ ಮಾರ್ಗದರ್ಶನ ಹಾಗೂ ಪ್ರಭಾರ ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನೀಲಕುಮಾರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.