ಹಿರೇಬಾಗೇವಾಡಿ: ದ್ವಿಚಕ್ರ ವಾಹನ ಅಪಘಾತಕ್ಕೀಡಾದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬರು ಗಾಯಗೊಂಡಿರುವ ಘಟನೆ ಮುತನಾಳ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.
ಗ್ರಾಮದ ಕೆರೆ ಓಣಿಯ ನಿವಾಸಿ ಸುಚಿತ ರಾಜು ದೇವರಕ್ಕಿ (19) ಮೃತ ಯುವಕ. ಗಾಯಾಳು ದೀಪಕ ಚನ್ನಪ್ಪ ಹುದಲಿ (19) ಅವರನ್ನು ಬೆಳಗಾವಿ ಅಸ್ಪತ್ರೆಗೆ ದಾಖಲಿಸಲಾಗಿದೆ.