ಈ ಬಗ್ಗೆ ತಮ್ಮ ಟ್ವಿಟರ್ನಲ್ಲಿ ವಿಡಿಯೊ ಹಾಕಿದ ಅವರು, ‘ಬೆಳಗಾವಿಯಲ್ಲಿ ಮಾರ್ಚ್ 5ರಂದು ಆಯೋಜಿಸಿದ ಕಾರ್ಯಕ್ರಮಕ್ಕೆ ಬರುವುದಾಗಿ ನಾನು ವಿಡಿಯೊ ಮೂಲಕ ಪ್ರಚಾರ ಮಾಡಿದ್ದೆ. ಆಗ ‘ಬೆಳಗಾವಿ’ ಎಂಬ ಪದ ಬಳಸಿದ್ದಕ್ಕೆ ಎಂಇಎಸ್ ಹಾಗೂ ಮಹಾರಾಷ್ಟ್ರದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಯಾವತ್ತೂ ಎಂಇಎಸ್ ಹಾಗೂ ಮರಾಠಿಗರ ಭಾವನೆಗಳೊಂದಿಗೆ ನಿಲ್ಲುತ್ತೇನೆ. ಮರಾಠಿಗರು ‘ಬೆಳಗಾಂವ’ ಪದ ಬಳಸುತ್ತಾರೆ. ‘ಬೆಳಗಾವಿ’ ಪದ ಬಳಸಿ ಅವಠಿಗರಿಗೆ ಬೇಸರ ಮಾಡಿದ್ದಕ್ಕೆ ನಾನು ವಿಷಾಧಿಸುತ್ತೇನೆ’ ಎಂದೂ ಎನ್ಸಿಪಿ ಮುಖಂಡರಾದ ಅಮೋಲ್ ಹೇಳಿದ್ದಾರೆ.