ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನ್ಯಾಯಾಲಯದ ಹೊರಗೆ ಪ್ರಕರಣದ ಬಗ್ಗೆ ಮಾತಾಡುವುದು, ಮಹಾರಾಷ್ಟ್ರದವರಿಗೆ ನ್ಯಾಯಾಲಯ ಮತ್ತು ಕಾನೂನಿನ ಬಗ್ಗೆ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಅವರಿಗೆ ಪರಿಹಾರ ನ್ಯಾಯಾಲಯದಲ್ಲಿ ಆಗಬೇಕೋ ಅಥವಾ ಬೀದಿಯಲ್ಲಿ ಆಗಬೇಕೋ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.