‘ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಗಡಿ ಉಸ್ತುವಾರಿ ಸಮಿತಿ ಇದೆ. ನಗರ– ಪಟ್ಟಣ– ಹಳ್ಳಿ ಸೇರಿ 865 ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಾದ ಅವರದು. ಆದರೆ, ನಮ್ಮ ಸರ್ಕಾರ ಜಾರಿಗೆ ತಂದ ಗಡಿ ಸಂರಕ್ಷಣಾ ಆಯೋಗವು ಸಂಪೂರ್ಣ ನಿಷ್ಕ್ರಿಯವಾಗಿದೆ. 2018ರಿಂದ ಈವರೆಗೆ ಗಡಿ ಉಸ್ತುವಾರಿ ಸಚಿವರೇ ಇಲ್ಲ. ಸರ್ಕಾರ ಇಂಥ ಗಂಭೀರ ವಿಷಯವನ್ನು ಹಗುರವಾಗಿ ಪರಿಗಣಿಸಬಾರದು’ ಎಂದೂ ಅವರು ಕೋರಿದ್ದಾರೆ.