ತಾಲ್ಲೂಕಿನ ಕಾಲು ಭಾಗ ನದಿ ತೀರದ ಪ್ರದೇಶವಾದರೆ ಮುಕ್ಕಾಲು ಪ್ರದೇಶ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಅವರು ಕೃಷಿ ಹೊಂಡ, ಕೆರೆ–ಕಟ್ಟೆಗಳು, ಕೊಳವೆಬಾವಿಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ. ಇದಕ್ಕೆ ರಾಜಶೇಖರ ಅವರೂ ಹೊರತಾಗಿರಲಿಲ್ಲ. ಹೀಗಾಗಿ, ಅವರು ಕೃಷಿ ಹೊಂಡ ನಿರ್ಮಿಸಿದ್ದಾರೆ. ಆಗಾಗ ನಾಲೆಯಲ್ಲಿ ಸಿಗುವ ನೀರು ಹಾಗೂ ಕೊಳವೆಬಾವಿಯಿಂದ ನೀರನ್ನು ಕೃಷಿ ಹೊಂಡದಲ್ಲಿ ತುಂಬಿಕೊಂಡು ಬೇಸಿಗೆಯಲ್ಲಿ ತೊಂದರೆ ಆಗದಂತೆ ಮಾಡಿಕೊಂಡಿದ್ದಾರೆ.