‘ಶರತ ಸಿದ್ದಪ್ಪ ಹಸಿರೆ ಮೃತ. ಆತ ಕಾಣೆಯಾಗಿರುವ ಕುರಿತು ಹಾರೂಗೇರಿ ಪೊಲೀಸ್ ಠಾಣೆಗೆ ಪೋಷಕರು ಶುಕ್ರವಾರ ದೂರು ನೀಡಿದ್ದರು. ಆದರೆ, ಆತ ಕೊಳವೆಬಾವಿಗೆ ಬಿದ್ದಿರುವುದು ಶನಿವಾರ ಖಚಿತವಾಗಿತ್ತು. ತಾಲ್ಲೂಕು ಆಡಳಿತ, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಾತ್ರಿ ದೇಹವನ್ನು ಮೇಲಕ್ಕೆ ತೆಗೆದಿದ್ದಾರೆ. 5ರಿಂದ 8 ಅಡಿ ಆಳದಲ್ಲಿ ದೇಹ ಸಿಲುಕಿತ್ತು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.