ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕದಲ್ಲಿ ಪೂಜಾರಿ ಸ್ಪರ್ಧೆಗೆ ಆಗ್ರಹಿಸಿ ಬೆಂಬಲಿಗರ ಧರಣಿ

Last Updated 17 ನವೆಂಬರ್ 2019, 15:23 IST
ಅಕ್ಷರ ಗಾತ್ರ

ಗೋಕಾಕ: ಮತ ಕ್ಷೇತ್ರದ ಉಪಚುನಾವಣೆಯಲ್ಲಿ ಅಶೋಕ ಪೂಜಾರಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಭಾನುವಾರ ಧರಣಿ ನಡೆಸಿದರು.

ಇಲ್ಲಿನ ಅಂಬಿಗೇರ ಗಲ್ಲಿಯಲ್ಲಿರುವ ಮನೆ ಆವರಣದಲ್ಲಿ ದಸ್ತಗೀರ ಪೈಲ್ವಾನ ನೇತೃತ್ವದಲ್ಲಿ ಜಮಾಯಿಸಿದ ಬೆಂಬಲಿಗರು, ಪೂಜಾರಿ ಪರ ಜಯ ಘೋಷಣೆಗಳನ್ನು ಕೂಗಿದರು. ‘ಸ್ಪರ್ಧೆಯಿಂದ ಹಿಂದೆ ಸರಿಯಬಾರದು. ಸ್ವತಂತ್ರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಯಬೇಕು’ ಎಂದು ಒತ್ತಾಯಿಸಿದರು.

ವಕೀಲ ಎಂ.ಎ. ಪೀರಜಾದೆ, ಕಲ್ಲಯ್ಯ ಮಠಪತಿ, ಈರಣ್ಣ ಹಿರೇಮಠ, ಬಿಲಾಲ ಕಲ್ಲೋಳಿ, ಚಂದ್ರಶೇಖರ ಬಬಲಿ, ಗುರು ಬೆನವಾಡ, ಅನಿಲ ಸಂಕಾವಿ, ನಾಗು ದೇಸಾಯಿ, ಮಂಜುನಾಥ ಪಾಟೀಲ, ರವಿ ಮಡಿವಾಳ ಇದ್ದರು.

ಧರಣಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಭಾವಚಿತ್ರವಿದ್ದ ಟಿ ಶರ್ಟ್‌ ಧರಿಸಿದ್ದು ಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT