ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸುಂಡಿ: ಉರುಸ್ ನಾಳೆ, ನಾಡಿದ್ದು

Last Updated 23 ಜುಲೈ 2019, 13:12 IST
ಅಕ್ಷರ ಗಾತ್ರ

ಕರೀಕಟ್ಟಿ: ಸಮೀಪದ, ಸವದತ್ತಿ ತಾಲ್ಲೂಕಿನ ಅಸುಂಡಿ ಗ್ರಾಮದ ಫೀರ ದಿಲಾವರಗೋರಿ ಶಹಾ ವಲಿಯವರ ಸಂದಲ್‌ ಹಾಗೂ ಉರುಸ್ ಕಾರ್ಯಕ್ರಮವನ್ನು ಜುಲೈ 24 ಹಾಗೂ 25ರಂದು ಸಂಭ್ರಮದಿಂದ ನಡೆಯಲಿದೆ.

24ರಂದು ರಾತ್ರಿ 9ಕ್ಕೆ ಸಂದಲ್ (ಗಂಧ ಏರಿಸುವುದು) ಕಾರ್ಯಕ್ರಮ ನಡೆಯಲಿದೆ. ಜುಲೈ 25ರಂದು ಉರುಸ್ ನೆರವೇರಲಿದೆ. ರಾತ್ರಿ 9ಕ್ಕೆ ಡೊಳ್ಳಿನ ತತ್ವ ಪದಗಳ ಕಾರ್ಯಕ್ರಮ ಜರುಗಲಿದೆ. ರಾಮದುರ್ಗ ತಾಲ್ಲೂಕು ಅವರಾದಿ ಶಿವಪೇಟೆಯ ಓಂ ಶಿವಮೇಳದ ರಾಷ್ಟ್ರಮಟ್ಟದ ಕಲಾವಿದ ಶಿದ್ದು ಮೋಟೆ ಗಾಯನ ಪ್ರಸ್ತುತಪಡಿಸುವರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಹಾಗೂ ಸಾಧನೆ ಮಾಡಿದ ಗ್ರಾಮದವರನ್ನು ಸನ್ಮಾನಿಸಲಾಗುವುದು. ಪ್ರತಿಭೆಗಳನ್ನು ಪುರಸ್ಕರಿಸಲಾಗುವುದು. ಭಕ್ತರು ಪಾಲ್ಗೊಳ್ಳಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT