24ರಂದು ರಾತ್ರಿ 9ಕ್ಕೆ ಸಂದಲ್ (ಗಂಧ ಏರಿಸುವುದು) ಕಾರ್ಯಕ್ರಮ ನಡೆಯಲಿದೆ. ಜುಲೈ 25ರಂದು ಉರುಸ್ ನೆರವೇರಲಿದೆ. ರಾತ್ರಿ 9ಕ್ಕೆ ಡೊಳ್ಳಿನ ತತ್ವ ಪದಗಳ ಕಾರ್ಯಕ್ರಮ ಜರುಗಲಿದೆ. ರಾಮದುರ್ಗ ತಾಲ್ಲೂಕು ಅವರಾದಿ ಶಿವಪೇಟೆಯ ಓಂ ಶಿವಮೇಳದ ರಾಷ್ಟ್ರಮಟ್ಟದ ಕಲಾವಿದ ಶಿದ್ದು ಮೋಟೆ ಗಾಯನ ಪ್ರಸ್ತುತಪಡಿಸುವರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಹಾಗೂ ಸಾಧನೆ ಮಾಡಿದ ಗ್ರಾಮದವರನ್ನು ಸನ್ಮಾನಿಸಲಾಗುವುದು. ಪ್ರತಿಭೆಗಳನ್ನು ಪುರಸ್ಕರಿಸಲಾಗುವುದು. ಭಕ್ತರು ಪಾಲ್ಗೊಳ್ಳಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.