ರೈತರ ಪರಿವರ್ತಕಗಳು ಹಾಳಾದರೆ, ಸರ್ಕಾರದ ಆದೇಶದ ಪ್ರಕಾರ 72ಗಂಟೆಗಳಲ್ಲಿ ಬದಲಾಯಿಸಕೊಂಡಬೇಕು. ಆದರೆ ಇಲ್ಲಿ ಆ ರೀತಿಯಾಗುತ್ತಿಲ್ಲ. ಹಾಳಾದ ಪರಿವರ್ತಕಗಳನ್ನು 20 ದಿನಗಳ ಹಿಂದೆಯೇ ಹೆಸ್ಕಾಂ ಕಚೇರಿಗೆ ತಂದಿಟ್ಟಿದ್ದಾರೆ. ಆದರೆ, ಅವರಿಗೆ ಬೇರೆ ಪರಿವರ್ತಕ ಒದಗಿಸುವುದಾಗಲೀ, ದುರಸ್ತಿಪಡಿಸಿಕೊಡುವ ಕೆಲಸವಾಗಲಿ ನಡೆದಿಲ್ಲ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಕಷ್ಟು ಪರಿವರ್ತಕಗಳು ಇದ್ದರೂ, ರೈತರಿಗೆ ಕೊಡುತ್ತಿಲ್ಲ ಎಂದು ದೂರಲಾಗುತ್ತಿದೆ.