ಅಥಣಿ: ‘ಕಾಯಕ, ದಾಸೋಹವನ್ನು ಉಸಿರಾಗಿಸಿಕೊಂಡಿದ್ದ ಬಸವಾದಿ ಶಿವ ಶರಣರು ನಮಗೆಲ್ಲರಿಗೂ ದಾರಿ ದೀಪವಾಗಿದ್ದಾರೆ’ ಎಂದು ಶೆಟ್ಟರಮಠದ ಮರಳುಸಿದ್ಧ ಸ್ವಾಮೀಜಿ ಹೇಳಿದರು.
887ನೇ ಬಸವ ಜಯಂತಿ ಅಂಗವಾಗಿ ಇಲ್ಲಿನ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಧರೇಪ್ಪ ಠಕ್ಕಣ್ಣವರ ಅವರ ಮನೆಯಲ್ಲಿ ನಡೆದ ಆಚರಣೆ ಹಾಗೂ ಬಡವರಿಗೆ ದವಸ ದಾನ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವ ಜಯಂತಿಯಂದು ಬಡವರಿಗೆ ನೆರವಾಗುವುದು ಶ್ಲಾಘನೀಯ’ ಎಂದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೂಚನೆಯಂತೆ 50 ಬಡ ಕುಟುಂಬಗಳಿಗೆ ತಲಾ 50 ಕೆ.ಜಿ ಜೋಳ, 25 ಕೆ.ಜಿ ಅಕ್ಕಿ, ಎರಡು ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿ ಹಾಗೂ ಒಂದು ಬಾಕ್ಸ್ ಮಾವಿನ ಹಣ್ಣು ಮೊದಲಾದವುಗಳನ್ನು ವಿತರಿಸಿದರು.
ವಚನ ಪ್ರಾರ್ಥನೆ ನಡೆಯಿತು. ಶಿವಪ್ಪ ಠಕ್ಕಣ್ಣವರ, ಬಸವರಾಜ ಠಕ್ಕಣ್ಣವರ, ಬಸವಪ್ರಭು ಪಾಟೀಲ, ಬಾಬು ಬಕಾರಿ, ರಾಮು ಮಾಳಿ, ಸಂತೋಷ ಗಾಳಿ, ಬೀಮು ಇದ್ದರು.