ಅಥಣಿ (ಬೆಳಗಾವಿ ಜಿಲ್ಲೆ): ಹಲ್ಯಾಳ ಗ್ರಾಮದ ಸಮೀಪ ರಸ್ತೆ ಪಕ್ಕ ಪ್ರಜ್ಞಾಹೀನವಾಗಿದ್ದ ಎರಡು ವರ್ಷದ ಬಾಲಕಿ ಬೆತ್ತಲೆ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದು ಗ್ರಾಮಸ್ಥರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಖಾಸಗಿ ಅಂಗವೂ ಸೇರಿದಂತೆ ಬಾಲಕಿಯ ಮೈ ತುಂಬ ಸಿಗರೇಟಿನಿಂದ ಸುಟ್ಟ ಗಾಯಗಳು ಆಗಿವೆ. ಬಾಲಕಿಯ ಗುರುತು ಪತ್ತೆಯಾಗಿಲ್ಲ.
ಡಿಎಸ್ಪಿ ಎಸ್. ಗಿರೀಶ, ಸಿಪಿಐ ಶಂಕರ ಗೌಡ ಬಸನಗೌಡರ, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.