ಬೆಳಗಾವಿ: ಖಾನಾಪುರ ತಾಲ್ಲೂಕಿನ ಜಾಂಬೋಟಿಯಲ್ಲಿ ಗುರುವಾರ ನಸುಕಿನಲ್ಲಿ ಕೆವಿಜಿ ಬ್ಯಾಂಕ್ ಕಳ್ಳತನಕ್ಕೆ ಯತ್ನ ನಡೆದಿದೆ. ಬ್ಯಾಂಕಿನ ಮೊದಲ ಷಟರ್ ಮುರಿದು ಒಳನುಗ್ಗಿದ್ದ ಕಳ್ಳರು, ಲಾಕರ್ ಮುರಿಯಲು ಮುಂದಾದಾಗ ಸೈರನ್ ಶಬ್ದ ಮಾಡಿದೆ. ಇದರಿಂದ ಬೆಚ್ಚಿದ ದುಷ್ಕರ್ಮಿಗಳು ಪರಾರಿಯಾದರು.
ಬ್ಯಾಂಕಿನಿಂದ ಸೈರನ್ ಕೂಗಿದ್ದರಿಂದ ಸುತ್ತಲಿನ ಮನೆಗಳ ಜನ ಎಚ್ಚರವಾದರು. ಬ್ಯಾಂಕಿನ ಷಟರ್ ಮುರಿದಿದ್ದು ಕಂಡು ಪೊಲೀಸರಿಗೆ ಮಾಹಿತಿ ತಲುಪಿಸಿದರು.
ಸ್ಥಳಕ್ಕೆ ಧಾವಿಸಿದ ಖಾನಾಪುರ ಇನ್ಸ್ಪೆಕ್ಟರ್ ಸುರೇಶ ಶಿಂಗಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಕೂಡ ಮಾಹಿತಿ ಸಂಗ್ರಹಿಸಿದರು.