ನಗರಪಾಲಿಕೆಯಿಂದ ಬೆಳಿಗ್ಗೆ ಅವರಿಗೆ ಪಲಾವ್ ನೀಡಲಾಗಿತ್ತು. ಇದು ಬೇಡ, ಚಪಾತಿ ಬೇಕೆಂದು ಪಟ್ಟು ಹಿಡಿದಿದ್ದರು. ನಮ್ಮನ್ನು ಬಿಟ್ಟುಬಿಡಿ ನಮ್ಮ ಊರಿಗೆ ಹೋಗುತ್ತೇವೆ ಎಂದು ದುಂಬಾಲು ಬಿದ್ದಿದ್ದರು. ಕೊರೊನಾ ವೈರಾಣು ಸೋಂಕು ಹರಡದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಅವರನ್ನು ಇಲ್ಲಿಯೇ ಇರಿಸಲಾಗಿದೆ. ಲಾಕ್ಡೌನ್ ಕೂಡ ಇರುವುದರಿಂದ ಅವರನ್ನು ಕಳುಹಿಸಲಾಗಿಲ್ಲ ಎಂದು ಗೊತ್ತಾಗಿದೆ.